ಶ್ರೀಚರಂತ್ ಫ಼ಿಲಂಸ್ ಲಾಂಛನದಲ್ಲಿ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ‘ಆಕ್ಟೋಪಸ್ ಚಿತ್ರಕ್ಕೆ ಕೆಂಪಾಪುರ ಅಗ್ರಹಾರದಲ್ಲಿ ಕಿಶೋರ್, ಯಜ಼್ಞಶೆಟ್ಟಿ, ಬುಲ್ಲೆಟ್ ಪ್ರಕಾಶ್, ಅಶ್ವಿನಿ ಅಭಿನಯಿಸಿದ ಕೆಲವು ಸನ್ನಿವೇಶಗಳ ಚಿತ್ರೀಕರಣ ನಡೆದಿದೆ. ಇದರೊಂದಿಗೆ ‘ಆಕ್ಟೋಪಸ್ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಮುಂದಿನ ತಿಂಗಳು ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಸಮಾರಂಭ ನಡೆಯಲಿದೆ.
ಡಿ.ಸಿ.ಪ್ರಸನ್ನಕುಮಾರ್ ದೊಡ್ಡಬೆಲೆ ನಿರ್ಮಿಸುತ್ತಿರುವ ಈ ಚಿತ್ರವನ್ನು ಅಣ್ಣಯ್ಯ.ಪಿ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರೆ ಕಥೆ ಬರೆದಿರುವ ಈ ಚಿತ್ರಕ್ಕೆ ಎಂ.ರಾಜೇಂದ್ರಕುಮಾರ್ ಆರ್ಯ ಚಿತ್ರಕಥೆ ಬರೆದಿದ್ದಾರೆ. ಲಕ್ಷ್ಮಣ್ ಶ್ರೀರಾಮ್ ಸಂಭಾಷಣೆ ಬರೆದಿದ್ದಾರೆ. ಮನೋಹರ್ ಜೋಷಿ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ಎ.ಕೆ.ರಿಶಾಲ್ಸಾಯಿ ಸಂಗೀತ ನಿರ್ದೇಶನ, ಮದನ್ - ಹರಿಣಿ ನೃತ್ಯ ನಿರ್ದೇಶನ ಹಾಗೂ ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕಿಶೋರ್, ಯಜ಼್ಞಶೆಟ್ಟಿ, ತಾರಾ, ತಿಲಕ್, ಅಶ್ವಿನಿ, ತ್ರಿಶೂಲ್ ಕಿರಣ್, ಜೈಜಗದೀಶ್, ಬುಲ್ಲೆಟ್ಪ್ರಕಾಶ್, ಬ್ಯಾಂಕ್ಜನಾರ್ದನ್, ರಮೇಶ್ ಪಂಡಿತ್, ಸಂಪತ್ರಾಮ್, ಮಾಸ್ಟರ್ ಚರಂತ್, ಮಾಸ್ಟರ್ ತುಷಾರ್ ಮುಂತಾದವರಿದ್ದಾರೆ.